ದೇಹ ಆತ್ಮ

ಆತ್ಮ ದೇಹಗಳದೇ ಒಂದು ಇತಿಹಾಸ
ಇವುಗಳ ನಡುವಿನ ಹೋರಾಟ ದೊಡ್ಡ ಸಹಾಸ
ಇಂದ್ರಿಯಗಳತ್ತ ಸರಿಯುವುದು ಪ್ರೇಯಸ್ಸು
ಆತ್ಮ ಅನುರಾಗದ ಚಿಂತನೆಯೇ ಶ್ರೇಯಸ್ಸು

ಅನಾತ್ಮನಾಗುವುದೆಂದರೆ ದೇಹ ಭಾವ
ಆತ್ಮ ಅನುಭವಿಸುವಿಕೆ ದೇವ ಭಾವ
ನಿತ್ಯವೂ ನಾವು ನಮ್ಮೊಂದಿಗಿನ ಯುದ್ಧ
ಈ ಅಂತರಂಗದ ದಾಳಿಗೆ ನೀನಿರಬೇಕು ಸಿದ್ಧ

ಪ್ರವತ್ತಿ ಮಾರ್ಗ ಅನುಸರಿಸದರೆ ಅಲ್ಪ ಸುಖ
ನಿವರ್ತ್ತಿ ಮಾರ್ಗ ಪಡೆದರೆ ಸದಾ ಸುಖ
ಬಾಹ್ಯ ಸುಖಗಳೆಲ್ಲ ಅದು ಕೇವಲ ಭ್ರಮೆ
ಅಂತರ ಆನಂದಗಳೆಲ್ಲ ಶಮ ದಮೆ

ಆತ್ಮನಿಗುಂಟು ಹಗಲು ರಾತ್ರಿಗಳು
ಹಗಲಿನಲಿ ಹೇಗಾದರೂ ಭಯವಿಲ್ಲ
ರಾತ್ರಿಗಳ ಹೆದ್ದಾರಿಯಲಿ ಬರೀ ಖಾತ್ರಿಗಳು
ಎಚ್ಚರವಿರದೆ ಆತ್ಮಗೆ ಉಳಿಗಾಲವಿಲ್ಲ

ನಮ್ಮನ್ನೆ ನಾವ ಕಾಪಾಡಿಕೊಳ್ಳಬೇಕು
ಯಾವದನ್ನು ಎಚ್ಚರದಿ ಪಡೆಯಬೇಕು
ನಾವಿಲ್ಲಿ ಶಾಶ್ವತವಾಗಿರಲು ಬಂದಿಲ್ಲ
ಮಾಣಿಕ್ಯ ವಿಠಲನಾಗಲು ದುಡೀಬೇಕು ಇನ್ನೊಂದು ಇಂಚಿಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಹೆಂಡತಿ
Next post ಹೆಂಗುಸರು ಬಡಗಿ ಕೆಲಸ ಕಲಿಯಬೇಕೆ?

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys